Saturday, October 30, 2010

ಮಂಥನ

ದೃಷ್ಟಿ ಕೋನ:-
  • ವಿದ್ಯಾರ್ಥಿಗಳಲ್ಲಿರುವ ವಿವಿಧ ಕಲೆ ಹಾಗೂ ಪ್ರತಿಭೆಗಳನ್ನು ಬೆಳಕಿಗೆ ತರುವುದು, ಅದಕ್ಕೊಂದು ವೇದಿಕೆ ಕಲ್ಪಿಸುವುದು.
ಗುರಿ:-
  • ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇದ್ದೇ ಇರುತ್ತದೆ ಹಾಗೂ ಅವರು ಅದಕ್ಕೆ ತಕ್ಕ ವಿಭಿನ್ನ ಹವ್ಯಾಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ಕಲಾಸಕ್ತರನ್ನು ಒಂದೆಡೆಗೆ ಸೇರಿಸುವುದು.
  • ಸುಪ್ತವಾದ ಪ್ರತಿಭೆಗಳನ್ನು ಹೊರತಂದು ಅದನ್ನು ಪ್ರಚುರಪಡಿಸುವುದಕ್ಕೊಸ್ಕರ ಒಂದು ವೇದಿಕೆಯನ್ನು ಕಲ್ಪಿಸುವುದು.
  • ಕಲೆಗಳಲ್ಲಿ ಆಸಕ್ತರಾದ ಹಾಗೂ ಅದರಲ್ಲಿ ಈಗಾಗಲೇ ಪರಿಣಿತರಾದವರ ನಡುವೆ ಮುಕ್ತವಾದ ಮಂಥನ ನಡೆಸುವುದರ ಮೂಲಕ ಆಸಕ್ತರು ಪರಿಣಿತರಾಗುವುದರೆಡೆ ಶ್ರಮಿಸುವುದು.
  • ವಿಶಿಷ್ಟ ರೀತಿಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ ಈ ಕಲೆಗಳಲ್ಲಿ ಪರಿಪೂರ್ಣತೆಯಸ್ನ್ನು ಪಡೆದುಕೊಳ್ಳುವುದು.
  • ವಿಶೇಷ ಸಂಧರ್ಭಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ (ಉದಾ: ಅನಾಥಾಶ್ರಮ ವೃದ್ಧಾಶ್ರಮ ಹಳ್ಳಿ ಶಾಲೆಗಳು ಇತ್ಯಾದಿ) ರಂಗ ಪ್ರಯೋಗಗಳನ್ನು ನಡೆಸಿ ಸಾಮಾಜಿಕ ಜಾಗೃತಿ ತರುವುದು ಹಾಗೂ ವಿಶೇಷ ಅಭಿರುಚಿ ಬೆಳೆಸುವುದು.
  • ನಮ್ಮ ತಂಡದಲ್ಲಿ ನಿರ್ವಹಣಾ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಬೆಳೆಸುವುದು.
  • ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಉತ್ತಮ ಜವಾಬ್ದಾರಿಯುತ ನಾಗರಿಕನಾಗುವುದಕ್ಕೆ ಯೋಗ್ಯವಾದ ಉಪನ್ಯಾಸಗಳನ್ನು ಏರ್ಪಡಿಸುವುದು.
ಕಾರ್ಯ ಪದ್ಧತಿ:-
  • ಮೊದಲನೆಯದಾಗಿ ಆಸಕ್ತರನ್ನು ಕಲೆಗಳ ಆಧಾರದ ಮೇಲೆ ವಿಂಗಡಿಸುವುದು.  
           . ಸಾಂಸ್ಕೃತಿಕ ಕಲೆಗಳ ಆಧಾರದ ಮೇಲೆ
           .ಅಭಿನಯದ ಆಧಾರದ ಮೇಲೆ
           .ಸಾಹಿತ್ಯ ಪ್ರಕಾರಗಳ ಆಧಾರದ ಮೇಲೆ.
          .ಸೃಜನಶೀಲ ಚಿಂತನೆಯ ಆಧಾರದ ಮೇಲೆ.
          .ಸಾಮಾಜಿಕ ಚಿಂತನೆ ಮತ್ತು ಅಭಿವ್ಯಕ್ತಿಯ ಆಧಾರದ ಮೇಲೆ.
  • ಪ್ರತಿ ಭಾನುವಾರ ಸುಮಾರು ಮೂರರಿಂದ ನಾಲ್ಕು ತಾಸು ಕಲೆಗಳ ಅಭ್ಯಾಸ ಅದ್ಯಯನ ಹಾಗೂ ವಿನಿಮಯಗಳಲ್ಲಿ ತೊಡಗಿಸಿಕೊಳ್ಳುವುದು.
  • ಅದೇ ದಿನದಂದು ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ಸೂಚನೆಗಳನ್ನು ಪಡೆಯುವುದು.
  • ಚಿಂತನೆಗಳನ್ನು ವಿವಿಧ ಕಲಾಪ್ರಕಾರಗಳನ್ನು  ಕಾಲೇಜಿನಲ್ಲಿ 'ಭಿತ್ತಿಪತ್ರಿಕೆ'ಗಳ ಮೂಲಕ ಹೊರಸೂಸುವುದು.
  • ವಿವಿಧ ಕಾಲೇಜು ಅನಾಥಾಶ್ರಮ ಹಳ್ಳಿ ಶಾಲೆಗಳಲ್ಲಿ ಕಲೆಗಳನ್ನು ಪ್ರದರ್ಶಿಸುವುದು.
  • ವಿವಿಧ ಅಂತರ್ಕಾಲೇಜು ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
  • ವರ್ಷಾಂತ್ಯದಲ್ಲಿ ಕಾಲೇಜಿನಲ್ಲಿ ಎರಡು ದಿನದ ಪೂರ್ಣ ಪ್ರಮಾಣದ ರಂಗ ಪ್ರದರ್ಶನ ನೀಡುವುದು.